ವೀರಾಜಪೇಟೆ, ಮೇ 27: ಕೆರೆಗೆ ಸ್ನಾನಕ್ಕೆಂದು ತೆರಳಿದಾತ ನೀರಿನಲ್ಲಿ ಮುಳುಗಿ ಮರಣಹೊಂದಿದ ಘಟನೆ ಗ್ರಾಮಾಂತರ ಪ್ರದೇಶ ಆರ್ಜಿ ಗ್ರಾಮದಲ್ಲಿ ಸಂಭವಿಸಿದೆ.

ಕಂಡಿಮಕ್ಕಿ ರಸ್ತೆಯ ನಿವಾಸಿ ಹೆಚ್. ಮುತ್ತ ಅಲಿಯಾಸ್ ಚಿಕ್ಕ (40) ಕೆರೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ವ್ಯಕ್ತಿ. ಆರ್ಜಿ ಗ್ರಾಮದ ಕರ್ತಚ್ಚಿರ ರಾಯ್ ಅಯ್ಯಪ್ಪ ಅವರ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಚಿಕ್ಕ ಮನೆಯ ಸನಿಹದಲ್ಲಿರುವ ಕೆÀರೆಯಲ್ಲಿ ಸ್ನಾನ ಮಾಡಲು ತೆರಳಿದ್ದಾನೆ. ಕ್ಷಣ ಮಾತ್ರದಲ್ಲಿ ಕೆರೆಯಿಂದ ದೊಡ್ಡ ಸ್ವರದಲ್ಲಿ ಕರೆಯುವ ಶಬ್ದ ಕೇಳಿಸಿದೆ. ಮನೆಯಲ್ಲಿದ್ದ ಮಹೇಶ ಕೆರೆಯ ಬಳಿ ಬರುವ ಹೊತ್ತಿನಲ್ಲಿ ನೀರಿನ ಮೇಲ್ಬಾಗದಲ್ಲಿ ಕೈ ಮಾತ್ರ ಕಾಣಿಸಿದೆ. ನೀರಿನಲ್ಲಿ ಮುಳುಗಿ ಚಿಕ್ಕ ಸಾವನ್ನಪ್ಪಿದ್ದು, ಘಟನೆಯ ವಿವರ ತೋಟದ ಮಾಲೀಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಮತ್ತು ಅಗ್ನಿಶಾಮಕ ದÀಳ ಸಿಬ್ಬಂದಿಗಳು ಆಗಮಿಸಿ ಒಂದು ಗಂಟೆಯ ಸತತ ಪ್ರಯತ್ನದಿಂದ ಶರೀರವನ್ನು ಹೊರತೆಗೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟದ ಮಾಲೀಕರು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಅಕಸ್ಮಿಕ ಮರಣ ಪ್ರಕರಣ ದಾಖಲಾಗಿದೆ.-ಕೆ.ಕೆ.ಎಸ್.