ಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪದ ಉಲುಗುಲಿ ನಾರ್ಗಾಣೆ ಗ್ರಾಮದ ಮಲ್ಲನ ಗುಣವತಿ ಮತ್ತು ಪೂವಯ್ಯ ಅವರ ಪುತ್ರ ಮನುಮೋಹನ (ಮನು), ಭಾಗಮಂಡಲ ಕೋರಂಗಾಲ ಗ್ರಾಮದ ಬಳಾಡ್ಕ ದಮಯಂತಿ ಅಯ್ಯಪ್ಪ ಅವರ ಪುತ್ರಿ ರೇಷ್ಮ ಇವರುಗಳ ವಿವಾಹ ವರನ ಸ್ವಗೃಹದಲ್ಲಿ ಕೊರೊನಾ ಹಿನ್ನೆಲೆ ಸರಕಾರದ ನಿಂಬಂಧನೆಗಳನ್ನು ಪಾಲಿಸುವುದರೊಂದಿಗೆ ಸರಳವಾಗಿ ನಡೆಯಿತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ವಿವಾಹ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವಿವಾಹ ಕಾರ್ಯಕ್ರಮದಲ್ಲಿ ಸರಕಾರದ ನಿಯಮ ಪಾಲನೆ ಗೊಳ್ಳುತ್ತಿದ್ದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.