ಶನಿವಾರಸಂತೆ, ಮೇ 24: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುಂದ ಗ್ರಾಮದ ಮನೆಯೊಂದರಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಅಪರಾಧ ಪತ್ತೆ ದಳದ ಸಿಬ್ಬಂದಿ ಆರೋಪಿ ದಾಸಯ್ಯ ಎಂಬಾತನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಮಾಡಿದ್ದಾರೆ. ತಲಾ ಒಂದೊಂದು ಕೆ.ಜಿ. ತೂಕದ 15 ಪ್ಯಾಕೇಟ್ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಕೃಷ್ಣನಾಯಕ್, ಎ.ಎಸ್.ಐ. ಗೋವಿಂದ್, ಸಿಬ್ಬಂದಿಗಳಾದ ಬೋಪಣ್ಣ, ಶಫೀರ್, ಲೋಕೇಶ್, ಮುರುಳಿ, ವಿನಯ ಪಾಲ್ಗೊಂಡಿದ್ದರು.