ಮಡಿಕೇರಿ, ಮೇ 22: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಖಾಝಿಗಳು ರಂಜಾನ್ ಹಬ್ಬವನ್ನು ಭಾನುವಾರದಂದು ಆಚರಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲೂ ದಕ್ಷಿಣ ಕನ್ನಡದ ಆಚರಣೆಯನ್ನು ಅನುಸರಿಸುವುದರಿಂದ ಜಿಲ್ಲೆಯಲ್ಲೂ ಕೂಡ ಭಾನುವಾರದಂದೆ ರಂಜಾನ್ ಹಬ್ಬ ನೆರವೇರಲಿದೆ.ದಕ್ಷಿಣ ಕನ್ನಡ ಖಾಝಿ ಅಲ್‍ಹಾಜ್ ತ್ವಕ್ವ ಅಹಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲೆಯ ಖಾಝಿ ಅಲ್‍ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರುಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.