ವೀರಾಜಪೇಟೆ, ಮೆ 20: ಕೇರಳ ರಾಜ್ಯದ ವಯನಾಡು ಜಿಲ್ಲೆಯ ನಿವಾಸಿ ಪೀಟರ್ (48) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬಿರುನಾಣಿ ಗ್ರಾಮದ ವ್ಯಕ್ತಿಯೋರ್ವರ ತೋಟದಲ್ಲಿ ಕೆಲಸ ನಿರ್ವಹಿಸುತಿದ್ದ ಕೇರಳ ಮೂಲದ ಎಂಟು ಮಂದಿ ನಗರದ ಹೊರವಲಯದ ಕುಕ್ಲೂರು ಗ್ರಾಮದ ಕೆ.ಬೋಪಯ್ಯ ಅವರ ಬಾಳೆ ತೋಟದ ಕೆಲಸಕ್ಕೆ ತಾ.18ರಂದು ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ಕುಳಿತಿರುವ ಭಂಗಿಯಲ್ಲಿ ವರ್ಗಿಸ್ ಮೃತನಾಗಿದ್ದಾನೆ. ಮೃತನ ತಮ್ಮ ವಿನು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ 174-ಸಿ ರೀತ್ಯಾ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತ ಶರೀರವನ್ನು ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತರ ಊರಿಗೆ ರವಾನಿಸಲಾಗಿದೆ. -ಕೆ.ಕೆ.ಎಸ್.