ಕೂಡಿಗೆ, ಮೇ 20: ಕಣಿವೆಯಲ್ಲಿರುವ ತೂಗು ಸೇತುವೆಯ ಮೇಲಿಂದ ಕಾವೇರಿ ನದಿಗೆ ಹಾರಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಣಿವೆ ಸಮೀಪದ ಭುವನಗಿರಿ ಗ್ರಾಮದ ಬಸವಯ್ಯ (65) ಎಂಬವರು ಕಣಿವೆಯ ತೂಗು ಸೇತುವೆ ಬಳಿ ಬಂದು ತನ್ನ ಬಟ್ಟೆಯನ್ನು ಕಳಚಿ ಸೇತುವೆಯ ಮಧ್ಯ ಭಾಗದಿಂದ ಕಾವೇರಿ ನದಿಗೆ ಹಾರಿದ್ದಾರೆ.

ಮೃತ ದೇಹವು ಸಂಜೆಯ ಸಮಯದಲ್ಲಿ ಕಾಣಿಸಿಕೊಂಡಿದೆ. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.