ಮಡಿಕೇರಿ, ಮೇ 19: ಸಂಪಾಜೆಯಲ್ಲಿ ಹಿರಿಯ ಕಾಂಗ್ರೆಸಿಗ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಜಿ ಎಸ್. ಮೊಹಿದ್ದೀನ್ ಕುಂಞ ಅವರು ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ತತ್ತರಿಸಿರುವ ಬಡ ಕುಟುಂಬಗಳಿಗೆ ರಂಜಾನ್ ಪ್ರಯುಕ್ತ ಮನೆ ಮನೆಗೆ ತೆರಳಿ ದಿನಸಿ ಸಾಮಗ್ರಿಗಳನ್ನು ಮತ್ತು ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು ತರಕಾರಿಗಳನ್ನು ವಿತರಿಸಿದರು.

ಈ ಸಂದರ್ಭ ಸಂಪಾಜೆ ಕಾಂಗ್ರೆಸ್ ವಲಯ ಅಧ್ಯಕ್ಷ ಪಿ.ಎಲ್. ಸುರೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಎಸ್.ಪಿ., ಗ್ರಾಮ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಕುಮಾರ್ ಚೆದ್ಕಾರ್, ಸಂಪಾಜೆ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿಜಯಕುಮಾರ್ ಕನ್ಯಾನ, ಕಾಂಗ್ರೆಸ್ ಮುಖಂಡ ಬಾಬು ಚೆಡಾವು, ಉಮೇಶ್ ಗಾಣಿಗದ್ದೆ, ವಾಸು ಪೂಜಾರಿ, ದೇವಪ್ಪ ದೇವಜನ, ತಿಮ್ಮಪ್ಪ ಸಂಪಾಜೆ, ರಾಮ ಅರಮನೆತೋಟ, ನಾರಾಯಣ ಅರಮನೆ ತೋಟ, ಮೋಹನ್ ಬಾಳಕಜೆ, ಮೀನಪ್ಪ ಬಳ್ಳಕ್ಕ ಚೆಂಬು ಮತ್ತು ಇತರರು ಸಾಥ್ ನೀಡಿದರು.