ಬೆಂಗಳೂರು, ಮೇ 19: ಹೊಟೇಲ್ ಉದ್ಯಮ ಪುನರಾರಂಭ ಸಂಬಂಧ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಿತು. ಹೊಟೇಲ್ ಆರಂಭಕ್ಕೆ ಅವಕಾಶ ಕೊಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಹೊಟೇಲ್ ಕಾರ್ಮಿಕರಿಗೂ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಬೇಕು, ನಷÀ್ಟದ ಪ್ರಮಾಣ ಹೆಚ್ಚಾಗುತ್ತಿದೆ, ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ಕ್ರಮಗಳೊಂದಿಗೆ ಹೊಟೇಲ್ ಆರಂಭಿಸುತ್ತೇವೆ. ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿತು. ಹೊಟೇಲ್‍ಗಳಲ್ಲಿ ಕೆಲಸ ಮಾಡುತ್ತಿರುವ ಸಪ್ಲೈಯರ್‍ಗಳು, ಅಡುಗೆ ಕೆಲಸಗಾರರು, ಕ್ಲೀನಿಂಗ್ ವಿಭಾಗದವರು, ಮೇಲ್ವಿಚಾರಣೆ, ರೂಂ ಬಾಯ್‍ಗಳು, ಎಲೆಕ್ಟ್ರೀಷಿಯನ್‍ಗಳು, ಗಾರ್ಡನ್ ಮೇಲ್ವಿಚಾರಣೆ, ಪಾಕಿರ್ಂಗ್ ಹಾಗೂ ಭದ್ರತಾ ಸಿಬ್ಬಂದಿಗಳು ಕೆಲಸವಿಲ್ಲದೆ ಕಷÀ್ಟಕ್ಕೆ ಸಿಲುಕಿದ್ದಾರೆ.

(ಮೊದಲ ಪುಟದಿಂದ) ಕಳೆದ 2 ತಿಂಗಳಿಂದ ಹೊಟೇಲುಗಳು ಸ್ಥಗಿತವಾಗಿರುವುದರಿಂದ ನಷÀ್ಟಕ್ಕೆ ಸಿಲುಕಿವೆ. ಟ್ಯಾಕ್ಸ್, ವಿದ್ಯುತ್ ಬಿಲ್, ಪ್ರವಾಸಿ ಶುಲ್ಕ, ಅಬಕಾರಿ ಶುಲ್ಕಗಳನ್ನು, ಜಿಎಸ್‍ಟಿ, ಸಿಎಸ್‍ಟಿ ತೆರಿಗೆಗಳನ್ನು ಕಡಿತಗೊಳಿಸಿ ಎಂದು ಮನವಿ ಸಲ್ಲಿಸಲಾಗಿದೆ. ಹೊಟೇಲ್ ಮಾಲೀಕರ ಸಂಘದ ಮನವಿ ಆಲಿಸಿದ ಮುಖ್ಯಮಂತ್ರಿಗಳು ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದಾರೆ.