ನಾಪೆÇೀಕ್ಲು, ಮೇ. 18: ಕುಂಜಿಲ ಗ್ರಾಮದ ಕಕ್ಕಬ್ಬೆಯ ಅಪ್ಪಾರಂಡ ಅಪ್ಪಯ್ಯ ಅವರ ಲೈನ್‍ಮನೆಯಲ್ಲಿ ಅಡಗಿಕೊಂಡಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಪೆÇನ್ನೀರ ಸ್ನೇಕ್ ಗಗನ್ ಸೆರೆಹಿಡಿದರು.

ನಂತರ ಅರಣ್ಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಭಾಗಮಂಡಲದ ಪಟ್ಟಿಕ್ಕಾಡ್ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಯಿತು.