ಶನಿವಾರಸಂತೆ, ಮೇ 18: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಿರಿಕೊಡ್ಲಿಮಠದಲ್ಲಿ ಮಠಾಧೀಶ ಸದಾಶಿವಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಸರಳ ವಿವಾಹ ಜರುಗಿತು.

ಬೀಟಿಕಟ್ಟೆ ಗ್ರಾಮದ ನಿಂಗಪ್ಪ - ಗೌರಮ್ಮ ದಂಪತಿಯ ಪುತ್ರ ಶಂಕರಪ್ಪ ಮತ್ತು ಕುಮಾರ್ - ಪ್ರಮೀಳಾ ದಂಪತಿಯ ಪುತ್ರಿ ಅರ್ಪಿತಾ ಅವರಿಗೆ ವಿವಾಹ ನಿಶ್ಚಯವಾಗಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಳ ವಿವಾಹಕ್ಕೆ ಒತ್ತು ನೀಡಿ, ಮಠದಲ್ಲಿ ಸದಾಶಿವ ಸ್ವಾಮೀಜಿ ಪೂಜಾವಿಧಿ ನೆರವೇರಿಸಿ ವಧೂ-ವರರಾದ ಅರ್ಪಿತಾ - ಶಂಕರಪ್ಪ ಅವರಿಗೆ ಶಿವಧೀಕ್ಷೆ ನೀಡಿದರು. ನಂತರ ಪುರೋಹಿತ ಸೋಮಶೇಖರ್ ಶಾಸ್ತ್ರಿ ವಿವಾಹ ವಿಧಿ ನೆರವೇರಿಸಿದರು. ಪೋಷಕರ ಸಮ್ಮುಖದಲ್ಲಿ ಅರ್ಪಿತಾ - ಶಂಕರಪ್ಪ ಅವರ ಸರಳ ವಿವಾಹ ನೆರವೇರಿ ದಂಪತಿಗಳಾದರು.