ಗೋಣಿಕೊಪ್ಪಲು, ಏ. 29: ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಆಗಮಿಸಿ ಅಲ್ಲಿನ ತರಕಾರಿ ವ್ಯಾಪಾರಸ್ಥರ ಅಹವಾಲು ಸ್ವೀಕರಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಾವು ಕಟಿ ಬದ್ದರಾಗಿದ್ದೇವೆ. ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿಯೇ ವ್ಯವಸ್ಥೆ ಕಲ್ಪಿಸುವಂತೆ ವರ್ತಕರು ಮನವಿ ಮಾಡಿದರು. ತರಕಾರಿ ಖರೀದಿಸಲು ದೂರದ ಪಟ್ಟಣದಿಂದ ನಾಗರಿಕರು ಆಗಮಿಸಲು ಸಾಧ್ಯವಾಗುತ್ತಿಲ್ಲ. ಆಟೋ ಬಾಡಿಗೆ ಕೊಡಲು ನಮ್ಮ ಬಳಿ ಹಣವೂ ಇಲ್ಲ ಎಂದು ನಾಗರಿಕರು ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಮೀದೇರಿರ ನವೀನ್, ತೀತಿರ ಧರ್ಮಜ, ಕಡೇಮಾಡ ಕುಸುಮ ಜೋಯಪ್ಪ, ಕುಲ್ಲಚಂಡ ಪ್ರಮೋದ್ ಗಣಪತಿ, ಅಬ್ದುಲ್ ಸಮ್ಮದ್ ಸಮೀರ್, ಪಿ.ಕೆ. ಪೆÇನ್ನಪ್ಪ, ನಾಮೇರ ಅಂಕಿತ್, ಕುಪ್ಪಂಡ ಜಯ, ಮುಕ್ಕಾಟೀರ ಸಂದೀಪ್, ಗ್ರಾಮ ಪಂಚಾಯಿತಿ ಸದಸ್ಯರಾದ ಮುರುಗ, ಜೆ.ಕೆ. ಸೋಮಣ್ಣ, ಪಂಚಾಯಿತಿ ಪಿಡಿಓ ಶ್ರೀನಿವಾಸ್ ಸೇರಿದಂತೆ ಮುಂತಾದವರು ಹಾಜರಿದ್ದರು.