ಗೋಣಿಕೊಪ್ಪ ವರದಿ, ಏ. 29: ಅಕ್ರಮವಾಗಿ ನಾಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪದಡಿ ಆನೆಚೌಕೂರು ವನ್ಯಜೀವಿ ವಲಯ ಕಾರ್ಯಾಚರಣೆ ತಂಡವು ಇಬ್ಬರನ್ನು ವಶಕ್ಕೆ ಪಡೆದು, ಬಂಧಿತರದಿಂದ 4 ಲೀಟರ್ ಸಾರಾಯಿ ವಶಪಡಿಸಿ ಕೊಂಡಿದ್ದಾರೆ. ನೊಕ್ಯ ಗ್ರಾಮದ ಸಂಜು, ಆಯಿರ ಸುಳಿ ಹಾಡಿಯ ಪಿ. ಎಂ. ರಾಮು ಬಂಧಿತ ಆರೋಪಿಗಳು. ವಶಕ್ಕೆ ಪಡೆದ ಸಾರಾಯಿ ಹಾಗೂ ಆರೋಪಿಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಆನೆಚೌಕೂರು ವನ್ಯಜೀವಿ ವಲಯ ಅಧಿಕಾರಿ ಶಿವಾನಂದ್ ನಿಂಗಾಣಿ ಮಾರ್ಗದರ್ಶನದಲ್ಲಿ ಡಿಆರ್‍ಎಫ್‍ಒ ಶಿವಲಿಂಗಯ್ಯ, ಸಿಬ್ಬಂದಿ ನಾರಾಯಣ, ನಟರಾಜ್, ದುರ್ಗೇಶ್, ಅನಂತ್, ಸುಬ್ರಮಣ್ಯ, ಅಜರುದ್ದೀನ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.