ಮಡಿಕೇರಿ, ಏ. 29: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಮಾಸ್ಕ್ ಧರಿಸುವ ಆದೇಶವಿದ್ದರೂ, ಕೆಲ ಸಾರ್ವಜನಿಕರು ಇದನ್ನು ಪಾಲಿಸುವುದು ಕಾಣುತ್ತಿಲ್ಲ. ಆದರೆ ಇಂದು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕ್ಯಾರೆಟ್ ತರಕಾರಿಯೊಂದು ಕೋಸಿನಿಂದ ತಯಾರಿಸಿದ ಮಾಸ್ಕ್ ಧರಿಸಿದ್ದಂತೆ ಕಂಡುಬಂದಿತ್ತು. ನಗರದ ಮಂಗಳಾದೇವಿ ನಗರದ ಕಲಾವಿದ ಮನು ವಿಭಿನ್ನ ಆಕಾರದ ಕ್ಯಾರೆಟ್ ಅನ್ನು ತಮ್ಮ ಕೈಚಳಕದ ಮೂಲಕ ಮತ್ತಷ್ಟು ಆಕರ್ಷಿಸುವಂತೆ ಮಾಡಿದರು.