ಕೂಡಿಗೆ, ಏ. 26: ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್ ಮತ್ತು ಇಲಾಖೆಯ ತಂಡ ಕುಶಾಲನಗರ ಹೋಬಳಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಪಾರೆ ಹಾಡಿ, ಬ್ಯಾಡಗೊಟ್ಟ, ಕಂಬಾರ ಹಾಡಿ ಹುದುಗೂರು ಹಾಡಿಗಳಿಗೆ ಭೇಟಿ ನೀಡಿ ಅವರುಗಳಿಗೆ ಆಹಾರ ವಿತರಣೆಯ ಬಗ್ಗೆ ಮಾಹಿತಿ ಪಡೆದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹಾಡಿಯ ಎಲ್ಲಾ ಕುಟುಂಬದವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ತಾಲೂಕು ಕಚೇರಿಯ ವ್ಯವಸ್ಥಾಪಕ ಮಧುಕುಮಾರ್ ಮತ್ತು ಅಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತರು ಮತ್ತು ಹಾಡಿಯ ಪ್ರಮುಖರು ಇದ್ದರು.