ಮಡಿಕೇರಿ, ಲಾಕ್‍ಡೌನ್ ನಡುವೆ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ವೀರಾಜಪೇಟೆ ತಾಲ್ಲೂಕಿನ ಹರಿಶ್ಚಂದ್ರ ಪುರದಲ್ಲಿ ಬಾಳೆತೋಟವನ್ನು ಕಾಡಾನೆಗಳು ಧ್ವಂಸ ಮಾಡಿವೆ. ಗ್ರಾಮದ ರಾಜಿತ್ ಎಂಬವರಿಗೆ ಸೇರಿದ ಬಾಳೆ ತೋಟದಲ್ಲಿ ಬಾಳೆ ಕಟಾವಿಗೆ ಬಂದಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಾಳೆ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಎಲ್ಲಾ ಫಸಲು ನೆಲಕಚ್ಚಿದೆ ಎಂದು ಹೇಳಲಾಗಿದೆ.