ಕುಶಾಲನಗರ, ಏ. 25: ಕೊರೊನಾ ಮುಕ್ತ ಕೊಡಗು ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊಡಗು ಜಿಲ್ಲಾಡಳಿತಕ್ಕೆ ಅಂಚೆ ಕಾರ್ಡ್‍ನಲ್ಲಿ ಅಭಿನಂದನೆ ಸಲ್ಲಿಸುವ ಹಿನ್ನೆಲೆ ‘ಶಕ್ತಿ’ ಮೂಲಕ ಕುಶಾಲನಗರ ಸಮೀಪದ ಮಾದಾಪಟ್ಟಣ ‘ಶಕ್ತಿ’ ಓದುಗರು ಸ್ಥಳೀಯ ವರದಿಗಾರರಲ್ಲಿ ಕಚೇರಿಗೆ ತಲುಪಿಸಲು 30ಕ್ಕೂ ಅಧಿಕ ಕಾರ್ಡ್‍ಗಳನ್ನು ಹಸ್ತಾಂತರಿಸಿದರು.