ಶನಿವಾರಸಂತೆ, ಏ. 25: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮಕ್ಕೆ ಮುಂದಿನ ತಿಂಗಳು ತಾ. 10ರಂದು ನಡೆಯಲಿರುವ ಮದುವೆಯಲ್ಲಿ ಭಾಗವಹಿಸಲು ಮೈಸೂರಿನ ಯುವಕನೋರ್ವ ಚಂದ್ರಮ್ಮ ಅವರ ಮನೆಗೆ ತಾ. 23ರಂದು ಬಂದಿರುವುದನ್ನು ಗಮನಿಸಿ ಗೃಹ ಬಂಧನಕ್ಕೆ ಸೂಚಿಸಲಾಗಿದೆ.
ಪಂಚಾಯಿತಿ ಮಟ್ಟದ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರು ಶುಕ್ರವಾರ ಬೆಳಿಗ್ಗೆ ಮಹಿಳೆಯ ಮನೆಗೆ ಭೇಟಿ ನೀಡಿ ಪೂರ್ವಪರ ವಿಚಾರಿಸಿದರು. ಅವರ ಹಾಗೂ ಕುಟುಂಬದ ರಕ್ಷಣೆಗೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಸೂಚಿಸಿ, ಯುವಕನ ಕೈಗೆ ಸೀಲ್ ಹಾಕಿ ಕ್ರಮವಾಗಿ ಗೃಹಬಂಧನ ಪಾಲಿಸುವಂತೆ ಸೂಚಿಸಿದರು. ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯ ಎ.ಆರ್. ರಕ್ಷಿತ್, ಪಂಚಾಯಿತಿ ಕಾರ್ಯದರ್ಶಿ ವೇಣುಗೋಪಾಲ್, ಆಶಾಕಾರ್ಯಕರ್ತೆ ಮಮ್ತಾಜ್, ಅಂಗನವಾಡಿ ಕಾರ್ಯಕರ್ತೆ ಫಾತಿಮ ಹಾಜರಿದ್ದರು.