ಗೋಣಿಕೊಪ್ಪಲು, ಏ. 22: ಕುಟ್ಟ ವೃತ ನಿರೀಕ್ಷ ಪರಶಿವಮೂರ್ತಿ ನೇತೃತ್ವದಲ್ಲಿ ಕುಟ್ಟ ಹಾಗೂ ಸುತ್ತ ಮುತ್ತಲಿರುವ ವಿವಿಧ ಕೋಮಿನ ಮುಖಂಡರುಗಳೊಂದಿಗೆ ರಂಜಾನ್ ಹಬ್ಬದ ಆಚರಣೆ ಕುರಿತು ಶಾಂತಿ ಸಭೆ ನಡೆಯಿತು. ಕೊರೊನಾ ಮಹಾಮಾರಿಯಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ತಪ್ಪದೆ ಪಾಲಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಅನಾವಶ್ಯಕವಾಗಿ ಯಾರೂ ಕೂಡ ಮನೆಯಿಂದ ಹೊರಗಡೆ ಸುತ್ತಾಡಬಾರದು ರಂಜಾನ್ ಮಾಸಾಚಾರಣೆಯ ಪ್ರಾರ್ಥನೆ ಹಾಗೂ ಇಫ್ತಾರ್ ಅನ್ನು ಸಹ ಮನೆಯಲ್ಲೇ ಅಚರಿಸಿ ಎಂದು ಪರಶಿವಮೂರ್ತಿ ಮನವಿ ಮಾಡಿದರು.

ಸಭೆಯಲ್ಲಿ ಕುಟ್ಟ ಠಾಣಾಧಿಕಾರಿ ಚಂದ್ರಪ್ಪ, ಸಂತ ಮೇರಿ ಚರ್ಚನ ಲೂರ್ದ್ ಪ್ರಸಾದ್, ಕುಟ್ಟ ಮಸೀದಿಯ ಅಧ್ಯಕ್ಷ ಮೊಹಿದ್ದೀನ್, ಹಿಂದೂ ಸಂಘಟನೆಯ ಸಚ್ಚಿನ್ ನಾಲ್ಕೇರಿ ಮತ್ತಿತರು ಉಪಸ್ಥಿತರಿದ್ದರು.