ಶನಿವಾರಸಂತೆ, ಏ. 22: ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯ ಶಾಂತ್ವೇರಿ ಗ್ರಾಮದ ರಸ್ತೆ ಬದಿಯಲ್ಲಿ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 7 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ. ಕಣದಲ್ಲಿದ್ದ ರೂ. 7,580 ನಗದು ಹಾಗೂ 2 ವಾಹನ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಿನಲ್ಲಿ ತೊಡಗಿದ್ದ ಶಾಂತ್ವೇರಿ ಗ್ರಾಮದ ಮೋಹನ್, ಕರುಣಾಕರ, ಬದ್ರೂದ್ದೀನ್, ನಂದಿಗುಂದ ಗ್ರಾಮದ ಶಿವಣ್ಣ, ನಾಗೇಂದ್ರ, ಗೊಂದಳ್ಳಿ ಗ್ರಾಮದ ಜಿ.ಆರ್. ಕುಮಾರಪ್ಪ, ಹೆಗ್ಗುಳ ಗ್ರಾಮದ ಸುಬ್ರಮಣಿ ಸೇರಿದಂತೆ 7 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಒಂದು ಸ್ಟಿಫ್ಟ್ ಕಾರು ಹಾಗೂ ಟಿವಿಎಸ್ ಜುಪಿಟರ್ ಸ್ಕೂಟರ್ ವಾಹವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಠಾಣಾಧಿಕಾರಿ ಕೃಷ್ಣನಾಯ್ಕ್ ಕಲಂ 87 ಕೆ.ಪಿ. ಆಕ್ಟ್ ರೀತ್ಯಾ ಪ್ರಕಟಣೆ ದಾಖಲಿಸಿದ್ದಾರೆ.

ಡಿವೈಎಸ್‍ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ನೇತೃತ್ವದಲ್ಲಿ ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯ್ಕ್, ಎಎಸ್‍ಐ ಎಂ.ಹೆಚ್. ಗೋವಿಂದ್, ಹೆಡ್‍ಕಾನ್ಸ್‍ಟೇಬಲ್ ಎಂ.ಎಸ್. ಬೋಪಣ್ಣ, ಸಿಬ್ಬಂದಿಗಳಾದ ಶಣ್ಮುಖನಾಯಕ್, ಶಫೀರ್, ವಿನಯ್ ಭಾಗವಹಿಸಿದ್ದರು.