ಮಡಿಕೇರಿ, ಏ. 16: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವೂರು ಗ್ರಾಮದ ಅಮೆ ಮುದ್ದಪ್ಪ ಅವರ ಮಗ ಗಗನ್ ಅವರ ವಿವಾಹವು, ತಾ.16ರಂದು ಪೆರಾಜೆ ಗ್ರಾಮದ ತೊಕ್ಕುಳಿ ಬಾಲಕೃಷ್ಣ ಅವರ ಪುತ್ರಿ ಟಿ.ಬಿ. ಸ್ವಾತಿ ಅವರೊಂದಿಗೆ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಸುವಂತೆ ಈ ಹಿಂದೆ ತೀರ್ಮಾನಿಸಲಾಗಿದ್ದು, ಲಾಕ್‍ಡೌನ್ ಇರುವ ಕಾರಣ ಇಂದು ವಧುವಿನ ಸ್ವಗೃಹದಲ್ಲಿ ಸರಳ ರೀತಿಯಲ್ಲಿ ನಡೆಸಲಾಯಿತು.