ಮಡಿಕೇರಿ, ಏ. 16: ತೆಂಗಿನ ಮರದಿಂದ ತೆಂಗಿನಕಾಯಿ ಕೀಳುತ್ತಿದ್ದ ಸಂದರ್ಭ ವಿವಾಹಿತ ಯುವಕರೋರ್ವರು ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ.ಅಲ್ಲಿನ ನಿವಾಸಿ ಕಳ್ಳಿಚಂಡ ಅಶೋಕ್ ಮಂದಣ್ಣ (35) ಮೃತಪಟ್ಟಿರುವ ಯುವಕ. ಕಾಫಿ ಬೆಳೆಗಾರರಾಗಿರುವ ಕಳ್ಳಿಚಂಡ ಸುಬ್ಬಯ್ಯ ಅವರ ಪುತ್ರ ಅಶೋಕ್ ಮಂದಣ್ಣ ಇಂದು ಬೆಳಿಗ್ಗೆ ೯.೩೦ ರ ಸುಮಾರಾಗಿ ಥೆಂಗಿನ ಮರವೇರಿ ಅದನ್ನು ಸ್ವಚ್ಛಗೊಳಿಸುವೊಂದರಲ್ಲಿ ಕಾಯಿಗಳನ್ನೂ ಕೀಳಲು ಮುಂದಾಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕೆಳಗಿ ಬಿದ್ದು ಗಾಯಗೊಂಡಿದ್ದರು ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾರ್ಗ ಮದ್ಯ ಅಸುನೀಗಿದರೆ.