ಕುಶಾಲನಗರ, ಏ. 15: ಅಂಚೆ ಕಾರ್ಡ್ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆ ‘ಶಕ್ತಿ’ ಓದುಗರು, ಮಕ್ಕಳು, ಹಿರಿಯರು ಪತ್ರದ ಮೂಲಕ ‘ಶಕ್ತಿ’ ಕಚೇರಿಗೆ ತಲುಪಿಸಲು ಕೋರಿದ ಹಿನ್ನೆಲೆ ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದ ‘ಶಕ್ತಿ’ ಓದುಗರು ಕಾರ್ಡ್‍ಗಳನ್ನು ಸ್ಥಳೀಯ ವರದಿಗಾರರ ಮೂಲಕ ಹಸ್ತಾಂತರಿಸಿ ದರು. ಲಾಕ್‍ಡೌನ್ ಹಿನ್ನೆಲೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅಂಚೆ ಕಾರ್ಡ್ ಲಭಿಸದ ಓದುಗರು, ಹಿತೈಷಿಗಳು ಕಾರ್ಡ್‍ಗಳ ಅವಶ್ಯವಿದ್ದಲ್ಲಿ ಮೊ.ಸಂಖ್ಯೆ:9448274482 ಸಂಪರ್ಕಿಸಬಹುದು.