ಮಡಿಕೇರಿ, ಏ. 10: ಮಡಿಕೇರಿಯ ಜನತಾ ಬಜಾರ್‍ನಿಂದ ಪಡಿತರ ವಿತರಣೆಯನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದು ಜನತಾ ಬಜಾರ್ ಅಧ್ಯಕ್ಷ ಎನ್.ಎ. ರವಿ ಬಸಪ್ಪ ಅವರು ತಿಳಿಸಿದ್ದಾರೆ.

ಈ ಕುರಿತು ‘ಶಕ್ತಿ’ಗೆ ಪ್ರಕಟಣೆ ನೀಡಿರುವ ಅವರು, ಜನತಾ ಬಜಾರ್‍ನ ಪಡಿತರ ವಿತರಣೆಯನ್ನು ತಿಂಗಳ ಕೊನೆಯವರೆಗೂ ವಿತರಿಸಲಾಗುವುದು. ಪಡಿತರ ವಿತರಣೆಯನ್ನು ಒ.ಟಿ.ಪಿ. ಮುಖಾಂತರ ವಿತರಿಸಿರುವುದರಿಂದ ಕಾರ್ಡ್‍ದಾರರ ಮೊಬೈಲ್‍ಗೆ ಒ.ಟಿ.ಪಿ. ಬರುವುದು ತಡವಾಗುವುದು.

ಪಡಿತರ ವಿತರಣೆಯನ್ನು ಲಿಖಿತ ರೂಪದಲ್ಲಿ ಮಾಡಿದ್ದರೆ ಪಡಿತರ ವಿತರಣೆಯಲ್ಲಿ ಸುಲಭವಾಗುತಿತ್ತು ಎಂದಿದ್ದಾರೆ. ಕೋವಿಡ್-19 ಸಮಸ್ಯೆ ಇರುವುದರಿಂದ ಕಾರ್ಡ್‍ದಾರರು ಗುಂಪು ಗುಂಪಾಗಿ ನಿಲ್ಲದೆ ಸರತಿ ಸಾಲಿನಲ್ಲಿ ನಿಂತು ಸಹಕರಿಸಬೇಕಾಗಿ ಎನ್.ಎ. ರವಿ ಬಸಪ್ಪ ಅವರು ಮನವಿ ಮಾಡಿದ್ದಾರೆ.