ಮಡಿಕೇರಿ, ಏ. 10: ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಜನವಿಕಾಸ ಟ್ರಸ್ಟ್‍ನಿಂದ ನಡೆಸುತ್ತಿರುವ ವೃದ್ಧಾಶ್ರಮ ನಿವಾಸಿಗಳಿಗೆ ಆಹಾರ ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಭರವಸೆ ನೀಡಿದ್ದಾರೆ.

ಆಶ್ರಮದ 22 ಮಂದಿಗೆ ಆಹಾರದ ಕೊರತೆ ಕುರಿತು ದೂರುಗಳು ಕೇಳಿ ಬಂದ ಮೇರೆಗೆ; ಈ ಕೂಡಲೇ ಯಾರೊಬ್ಬರಿಗೂ ಹಸಿವಿನ ಸಮಸ್ಯೆ ಎದುರಾಗದಂತೆ ಅಗತ್ಯ ಸೌಲಭ್ಯ ದೊರಕಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಬಗ್ಗೆ ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದ ಅವರು, ಸರಕಾರದಿಂದ ಯಾರಿಗೂ ಆಹಾರದ ಕೊರತೆ ಎದುರಾಗದಂತೆ ನಿಗಾವಹಿಸಲು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ‘ಶಕ್ತಿ’ಗೆ ತಿಳಿಸಿದರು.ಗೌರವ್ ಕುಮಾರ್ ಭರವಸೆ