ಮಡಿಕೇರಿ, ಏ. 9: ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಗದಿಪಡಿಸಿದ್ದ ಯುವ ಜೋಡಿಯ ವಿವಾಹ ಸರಳವಾಗಿ ಸಂಪ್ರದಾಯ ಬದ್ಧವಾಗಿ ಇಂದು ನೆರವೇರಿತು.

ತಾಳತ್‍ಮನೆ ನಿವಾಸಿ ಹೊಸೋಕ್ಲು ಬಾಲಕೃಷ್ಣ ಹಾಗೂ ಸರೋಜಿನಿ ಅವರ ಪುತ್ರಿ ಹೆಚ್.ಬಿ. ಸುನಿತಾ ಹಾಗೂ ಕರಿಕೆ ಗ್ರಾಮದ ಹೊಸಮನೆ ದಿವಾಕರ ಹಾಗೂ ಕುಂತಿ ಅವರ ಪುತ್ರ ಹೆಚ್.ಡಿ. ಸುದರ್ಶನ್ ಅವರ ವಿವಾಹ ತಾಳತ್‍ಮನೆಯ ವಧುವಿನ ಸ್ವಗೃಹದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಹೊಸೋಕ್ಲು ಸೋಮಯ್ಯ ಅವರ ಮುಂದಾಳತ್ವದಲ್ಲಿ ಸಾಂಗವಾಗಿ ನೆರವೇರಿತು.