ವೀರಾಜಪೇಟೆ, ಏ. 9: ಕೊರೊನಾ ವೈರಸ್ ಮುಂಜಾಗ್ರತೆಯ ಲಾಕ್‍ಡೌನ್ ನಡುವೆಯೂ ವೀರಾಜಪೇಟೆಗೆ ಸಮೀಪದ ತೋರ ಗ್ರಾಮದಲ್ಲಿ ಸರಳ ವಿವಾಹ ನಡೆದಿದೆ.

ತೋರ ಗ್ರಾಮದ ಪ್ರಭು ಕುಮಾರ್ ಹಾಗೂ ಅದೇ ಗ್ರಾಮದ ಪ್ರಿಯಾ ಇವರ ವಿವಾಹವು ತಾ. 8 ರಂದು ಸಾಮಾಜಿಕ ಅಂತರ ಕಾಯ್ದುಕೊಂಡು ಕೇವಲ 9 ಮಂದಿ ಸೇರಿ ತೋರದ ವನದುರ್ಗಿ ದೇವಾಲಯದಲ್ಲಿ ನೆರವೇರಿತು.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬಿದ್ದ ಭಾರೀ ಮಳೆಗೆ ತೋರದಲ್ಲಿ ಉಂಟಾದ ಜಲ ಪ್ರಳಯದಲ್ಲಿ ಪ್ರಭುಕುಮಾರ್, ಅವರ ತಾಯಿ, ಪತ್ನಿ ಹಾಗೂ ಎರಡು ಮಕ್ಕಳನ್ನು ಕಳೆದುಕೊಂಡಿದ್ದರು.

ತೋರ ಗ್ರಾಮದ ಪ್ರಿಯಾಳನ್ನು ಕೇರಳಕ್ಕೆ ಮದುವೆ ಮಾಡಿ ಕೊಟ್ಟಿದ್ದರೂ ಎರಡು ವರ್ಷಗಳ ಹಿಂದೆ ಗಂಡ ಸಾವನ್ನಪ್ಪಿದ ನಂತರ ಆಕೆ ಮರಳಿ ಬಂದು ಎರಡು ಮಕ್ಕಳೊಂದಿಗೆ ತೋರದಲ್ಲಿ ವಾಸಿಸುತ್ತಿದ್ದಳು.