ಗೋಣಿಕೊಪ್ಪ ವರದಿ, ಮಾ. 31 : ಬೇಗೂರು ಗ್ರಾಮದ ಕಾಫಿ ಬೆಳೆಗಾರ ಕಾಯಪಂಡ ಮಾಚಯ್ಯ ಅವರ ಹಸುವನ್ನು ಹುಲಿ ಕೊಂದುಹಾಕಿದೆ. ಮಾ. 29 ರಾತ್ರಿ ಕೊಟ್ಟಿಗೆ ಸಮೀಪ ದಾಳಿ ನಡೆಸಿರುವ ಹುಲಿ ಭಾಗಶಃ ತಿಂದು ಹಾಕಿದೆ. ಮಾ. 31ರ ಬೆಳಗ್ಗೆ ವಿಚಾರ ಅರಿವಾಗಿದೆ. ಈ ಬಗ್ಗೆ ಪೊನ್ನಂಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.