ನಾಪೆÉÇೀಕ್ಲು, ಮಾ. 31: ಕೊಳೆತ ಸ್ಥಿತಿಯಲ್ಲಿ ಸಮೀಪದ ಚೆರಿಯಪರಂಬು ಕಾವೇರಿ ನದಿಯಲ್ಲಿ ಸಿಕ್ಕಿದ ಪುರುಷ ಶವದ ಗುರುತು ಪತ್ತೆಯಾಗಿದೆ. ಮೃತನನ್ನು ಎಂ.ಟಿ. ವಿಠಲ (54) ಎಂದು ಗುರುತಿಸಲಾಗಿದೆ.

ಮೃತನ ಜೇಬಿನಲ್ಲಿ ಇದ್ದ ಚೀಟಿಯಲ್ಲಿ ಎಂ.ಟಿ. ವಿಠಲ ಎಂದು ಬರೆದಿತ್ತು. ಆ ಸಂದರ್ಭ ಗ್ರಾಮಸ್ಥರು ಈತ 6 ತಿಂಗಳ ಹಿಂದೆ ಚೋನಕೆರೆ ಗ್ರಾಮದಿಂದ ಕಾಣೆಯಾಗಿದ್ದ ವ್ಯಕ್ತಿ ಎಂದು ಅನುಮಾನಿಸಿ ಚೋನಕೆರೆ ಗ್ರಾಮದ ಆತನ ಪತ್ನಿ ನಮಿತಾ ಅವರಿಗೆ ದೂರವಾಣಿ ಮೂಲಕ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ನಮಿತಾ ಮತ್ತು ಆಕೆಯ ಪುತ್ರ ಮೃತ ವ್ಯಕ್ತಿಯ ಬಟ್ಟೆ ಪರಿಶೀಲಿಸಿ ಗುರುತು ಪತ್ತೆ ಮಾಡಿದ್ದಾರೆ. ಸ್ಥಳಕ್ಕೆ ಸಹಾಯಕ ಠಾಣಾಧಿಕಾರಿ ದೇವರಾಜ್, ಹೆಡ್‍ಕಾನ್ಸ್ ಟೇಬಲ್‍ಗಳಾದ ಸಮ್ಮದ್, ಫ್ರ್ರಾನ್ಸಿಸ್, ಮಧುಸೂದನ್, ರಾಜೇಶ್ ಭೇಟಿ ನೀಡಿದರು.