ಗೋಣಿಕೊಪ್ಪ ವರದಿ, ಮಾ. 31: ಕೊರೊನಾ ವೈರಸ್ ದಾಳಿಯಿಂದ ಅಗತ್ಯ ವಸ್ತು ದಕ್ಕಿಸಿಕೊಳ್ಳಲಾಗದವರಿಗೆ ಪ್ರಯೋಜನವಾಗುವಂತೆ ಗೋಣಿಕೊಪ್ಪದಲ್ಲಿ ಹಸಿದವನಿಗೆ ತಣಿವು ಪೆಟ್ಟಿಗೆ ಇಡುವ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮಕೈಗೊಂಡಿದೆ. ಜಿಲ್ಲಾಡಳಿತ ಯೋಜನೆಯಂತೆ ಬಸ್ ನಿಲ್ದಾಣ ಸಮೀಪ ಪೆಟ್ಟಿಗೆ ಇಡಲಾಗಿದೆ. ಅಗತ್ಯ ವಸ್ತು ಇರುವವರು ಆಹಾರಧಾನ್ಯ ತಂದು ಇಡಲು ಅವಕಾಶ ನೀಡಲಾಗಿದೆ.