ನಾಪೋಕ್ಲು, ಮಾ. 31: ಸಮೀಪದ ಕರಡ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ನಷ್ಟ ಸಂಭವಿಸಿದೆ. ಇಲ್ಲಿನ ಕಾಫಿ ಬೆಳೆಗಾರರ ತೋಟ ಗಳಲ್ಲಿ ಅಡ್ಡಾಡಿರುವ ಕಾಡಾನೆಗಳು ಕಾಫಿ ಗಿಡಗಳು ಸೇರಿದಂತೆ ಸ್ಪಿಂಕ್ಲರ್ ಪೈಪ್‍ಗಳನ್ನು ತುಳಿದು ಧ್ವಂಸ ಮಾಡಿವೆ. ಇಲ್ಲಿನ ನಿವಾಸಿ ಚೊಟ್ಟಳಿಯಮಂಡ ಪ್ರೇಮ ಅವರ ಕಾಫಿಯ ತೋಟದಲ್ಲಿನ ಗಿಡಗಳು, ಬಾಳೆ ಮತ್ತಿತರ ಕೃಷಿ ಫಸಲು ನಷ್ಟವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಪದೇಪದೇ ಕಾಡಾನೆಗಳು ದಾಳಿ ಮಾಡುತ್ತಿದ್ದು ಸಂಬಂಧಿಸಿದವರು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರೇಮ ಒತ್ತಾಯಿಸಿದ್ದಾರೆ. - ದುಗ್ಗಳ