ಮಡಿಕೇರಿ, ಮಾ. 21: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರಿ ಕಲ್ಲುಕೋರೆ ವಾಸಿ ಮನೆಯಲ್ಲಿ ಯೋಗಕ್ಷೇಮ ನೋಡಿಕೊಳ್ಳಲು ಯಾರು ಇಲ್ಲದ ವಿಶೇಷಚೇತನ ಹೆಚ್.ಬಿ. ಸೀನ ಅವರ ದುಸ್ಥಿತಿಯನ್ನು ಗಮನಿಸಿದ ಆಡಳಿತ ಮಂಡಳಿಯು ಅವರಿಗೆ ನೆರವು ನೀಡಿದೆ. ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಎಂ. ಗೋಪಿಚಿಣ್ಣಪ್ಪ, ಪಿ.ಡಿ.ಓ. ಶ್ರೀನಿವಾಸ್ ಎಂ.ಡಿ., ಸದಸ್ಯ ನರಸಿಂಹ ಇತರರು ಅವರಿಗೆ ಅಗತ್ಯವಾಗಿ ಬೇಕಾದ ದಿನನಿತ್ಯ ಸಾಮಗ್ರಗಳಾದ ಅಕ್ಕಿ, ಬೇಳೆ, ಎಣ್ಣೆ ಹಾಗೂ ವೀಲ್‍ಚೇರ್, ಬಟ್ಟೆ ಇನ್ನಿತರ ಸಾಮಾನುಗಳನ್ನು ವಿತರಿಸುವ ಮೂಲಕ ಬದುಕಲು ನೆರವು ನೀಡಿ ಸಹಾಯಹಸ್ತ ಚಾಚಿದ್ದಾರೆ.