ಗುಡ್ಡೆಹೊಸೂರು, ಮಾ. 17: ಇಲ್ಲಿಗೆ ಸಮೀಪದ ಶ್ರೀ ಮುನೇಶ್ವರ ಮತ್ತು ಶ್ರೀ ನಾಗ ದೇವರ ಗುಡಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಶೇಷಪೂಜೆ ನಡೆಸಲಾಯಿತು.

ಪೂಜಾ ಕಾರ್ಯವನ್ನು ಕುಶಾಲನಗರದ ಶ್ರೀ ಆಂಜನೇಯ ದೇವಾಲಯದ ಅರ್ಚಕ ಮಯೂರ ಭಟ್ ನೆರವೇರಿಸಿದರು. ಪೂಜಾ ಕಾರ್ಯದಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ. ಪೊನ್ನಪ್ಪ, ಕಾರ್ಯದರ್ಶಿ, ರಜಿತ್ ಕುಮಾರ್ ಎಸ್.ಆರ್., ಸದಸ್ಯರಾದ ಗೋಪಾಲ ಎಂ.ಎ., ಚಂದ್ರಶೇಖರ್ ಭಟ್, ವೆಂಕಪ್ಪ, ಪಾಪು ಮುಂತಾದವರು ಹಾಜರಿದ್ದರು. ಈ ಸಂದರ್ಭ ಅನ್ನಸಂತರ್ಪಣೆ ಕಾರ್ಯ ನಡೆಸಲಾಯಿತು.