ವೀರಾಜಪೇಟೆ, ಮಾ. 5: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ವಿ.ಗಣಪತಿ ಎಂಬಾತ ಇಂದು ಮನೆಯ ವಿದ್ಯುತ್ ಸಂಪರ್ಕದ ಮೀಟರ್ ರೀಡಿಂಗ್ಗೆ ಬಂದಿದ್ದ ಮಂಜುನಾಥ್ ಪಟೇಲ್ (26) ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ವೀರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಸಿದ್ದಾನೆ. ಗಾಯಗೊಂಡ ಮಂಜುನಾಥ್ನನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪವರ್ಮನ್ ಮಂಜುನಾಥ್ನ ಕರ್ತವ್ಯಕ್ಕೆ ಅಡ್ಡಿಪಡಿಸುವುದರೊಂದಿಗೆ ಆತನ ಮೇಲೆ ಹಲ್ಲೆ ನಡೆಸಿದ ಗಣಪತಿ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು. ವೀರಾಜಪೇಟೆ ಉಪ ವಿಭಾಗಕ್ಕೆ ಸೇರಿದ ಪಾಲಿಬೆಟ್ಟ, ಸಿದ್ದಾಪುರ, ಅಮ್ಮತ್ತಿ ಸೇರಿದಂತೆ ವಿವಿಧೆಡೆಗಳಲ್ಲಿ ಸುಮಾರು 60ಕ್ಕೂ ಅಧಿಕ ಮಂದಿ ಪವರ್ಮನ್ಗಳು ಕಾರ್ಯ ನಿರ್ವಹಿಸುತಿದ್ದು ಸೆಸ್ಕಾಂನ ಉನ್ನತ ಅಧಿಕಾರಿಗಳು ಎಲ್ಲರಿಗೂ ಕಾರ್ಯ ನಿರ್ವಹಿಸಲು ಭದ್ರತೆ ಒದಗಿಸುವಂತೆ ಉಪ ವಿಭಾಗದ ಪವರ್ಮನ್ ಒಕ್ಕೂಟದ ಪ್ರಾಥಮಿಕ ಸಮಿತಿ ಅಧ್ಯಕ್ಷ ಯೋಗ್ರಾಜು ಅವರು ಮೇಲಧಿಕಾರಿಗಳು ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.