ಮೂರ್ನಾಡು, ಫೆ. 25: ಬಲಮುರಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧನ ಸಹಾಯ ನೀಡಲಾಯಿತು.

ದೇವಾಲಯದ ಅಧ್ಯಕ್ಷ ಪೆಬ್ಬಾಟಂಡ ಎ. ಪೆಮ್ಮಯ್ಯ ಅವರಿಗೆ 2 ಲಕ್ಷ ರೂಪಾಯಿ ಡಿಡಿಯನ್ನು ವಿತರಿಸಲಾಯಿತು. ಈ ಸಂದರ್ಭ ದೇವಾಲಯದ ಉಪಾಧ್ಯಕ್ಷ ಕೊಂಗಿರಂಡ ತಮ್ಮಯ್ಯ, ನಿರ್ದೇಶಕ ಆಂಗೀರಾ ಸಂತೋಷ್, ಐಚ್ಚೊಡಿಯಂಡ ಸುರೇಶ್, ಚಂಗಂಡ ಪಳಂಗಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಜಯಶ್ರೀ, ಪುಷ್ಪರಾಜ್, ಸೇವಾಪ್ರತಿನಿಧಿ ಸಾವಿತ್ರಿ, ಕಾವೇರಿ ಉಪಸ್ಥಿತರಿದ್ದರು.