ಮಡಿಕೇರಿ, ಫೆ. 25 : ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಸಮುದಾಯ ಬಾಂಧವರಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸಂಭ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಯಲ್ಲಿ ಶೇ.75ಕ್ಕೂ ಅಧಿಕ ಫಲಿತಾಂಶ ಪಡೆದುಕೊಂಡ ಚೈತ್ರಾ, ಪವಿತ್ರ, ಅಜಿತ್, ಶಕುಂತಲಾ, ಸಂಜಯ್ ಕುಮಾರ್, ರೋಜಾ, ಸಂಗೀತಾ, ಪುಷ್ಪರಾಜ್, ದೇವಿಕಾ, ದಿವ್ಯಾ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ತಮಿಳು ಸಮುದಾಯ ಬಾಂಧವರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ಉತ್ತಮ ಸಮಾಜ ಮುಖಿ ಕಾರ್ಯಕ್ರಮ ಆಯೋಜಿಸಿ ಇತರರಿಗೆ ಮಾದರಿಯಾಗ ಬೇಕೆಂದು ಸಲಹೆ ನೀಡಿದರು.

ಪಾಲಿಬೆಟ್ಟದ ಪ್ರಮುಖರಾದ ಕಾರ್ತಿಕ್ ಅವರು ಮಾತನಾಡಿ ಸಮುದಾಯ ಬಾಂಧವರ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ ಎಂದರು. ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ತಿರುಮಾಲ್ ರಾಜ, ಉಪಾಧ್ಯಕ್ಷ ಕಣ್ಣನ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಕ್ರೀಡಾ ಸಮಿತಿ ಸಂಚಾಲಕ ರವಿ, ಸಹ ಸಂಚಾಲಕ ಸುಧಾಕರ್, ಸಂಪಾಜೆ ಅಮ್ಮನ್ ಸೊಸೈಟಿಯ ಶಿವಪೆರುಮಾಲ್ ಸೇರಿದಂತೆ ಹಲವರು ಪಾಲ್ಗೊಂಡಿ ದ್ದರು. ಭಾನುವಾರ ಬೆಳಗ್ಗೆ ನಡೆದ ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಟೀಂ ಟರ್ಮಿನೇಟರ್ ತಂಡ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡರೆ, ಕೌಟಿಲ್ಯ ಬ್ರಿಗೇಡಿಯರ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ಪುರುಷರಿಗೆ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಪೊನ್ನತ್ ಮೊಟ್ಟೆಯ ಜಲ್ಲಿಕಟ್ಟ್ ತಂಡ ಪ್ರಥಮ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಟೀಂ ಬಿಳಿಗೇರಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಬಾಲಕರ ವಿಭಾಗದ ಒಂದು ಕಾಲು ಓಟದ ಸ್ಪರ್ಧೆಯಲ್ಲಿ ಮುಗೀಶ್(ಪ್ರ), ದಿನಿತ್(ದ್ವಿ), ಸಿದ್ದೇಶ್(ತೃ), ಹುಡುಗಿಯರಿಗೆ ನಡೆದ ಸ್ಪರ್ಧೆಯಲ್ಲಿ ಸಂದ್ಯಾ(ಪ್ರ), ಪ್ರಿಯದರ್ಶಿನಿ(ದ್ವಿ), ದೀಪಾಲಿ(ತೃ), 100 ಮೀಟರ್ ಬಾಲಕರ ಓಟದ ಸ್ಪರ್ಧೆಯಲ್ಲಿ ದಿನಿತ್(ಪ್ರ), ಮುಗೀಶ್(ದ್ವಿ), ಹುಡುಗಿಯರ ವಿಭಾಗದಲ್ಲಿ ಸಂದ್ಯಾ(ಪ್ರ), ಮಧುಮಿತ(ದ್ವಿ), ದೀಪ್ತಿ(ತೃ) ಬಹುಮಾನ ಪಡೆದುಕೊಂಡರು.

ಮಹಿಳೆಯರಿಗೆ ನಡೆದ ವಿಷದ ಚೆಂಡು ಸ್ಪರ್ಧೆಯಲ್ಲಿ ಅನ್ವಿತಾ(ಪ್ರ), ರಾಜೇಶ್ವರಿ(ದ್ವಿ), ಮಘೇಶ್ವರಿ(ತೃ), ಪುರುಷರ ವಿಭಾಗದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಈರ್ಲಪ್ಪ(ಪ್ರ), ಧರ್ಮ(ದ್ವಿ), ಸುರೇಶ್(ತೃ), ಪುರುಷರಿಗೆ ನಡೆದ ಶಾಟ್‍ಪುಟ್ ಸ್ಪರ್ಧೆಯಲ್ಲಿ ಜಯಕುಮಾರ್(ಪ್ರ), ಧರ್ಮ(ದ್ವಿ), ರವಿ(ತೃ), ಬಾಲ್ ಎಸೆತ ಸ್ಪರ್ಧೆಯಲ್ಲಿ ಸುಮತಿ(ಪ್ರ), ಸತ್ಯಾ(ದ್ವಿ), ಸಂದ್ಯಾ(ತೃ), ಮಹಿಳೆಯರಿಗೆ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಜಿತಾ(ಪ್ರ), ಸುಮತಿ(ದ್ವಿ), ಗೌರಿ(ತೃ) ಬಹುಮಾನ ಪಡೆದುಕೊಂಡರು.