ಮಡಿಕೇರಿ, ಫೆ. 25: ಮೂರ್ನಾಡಿನಲ್ಲಿ ಇತ್ತೀಚೆಗೆ ವೈದ್ಯ ಡಾ. ಜೆ.ಎ. ಕುಂಜ್ಞಬ್ದುಲ್ಲಾ ಅವರ ಆರೋಗ್ಯ ಕೇಂದ್ರದಲ್ಲಿ ಕೊಂಡಂಗೇರಿಯ ನಿವಾಸಿ ನೌಫಲ್ ಎಂಬಾತ ದಾಂಧಲೆ ನಡೆಸಿ ವೈದ್ಯರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಇದನ್ನು ಚೇಂಬರ್ ಆಫ್ ಕಾಮರ್ಸ್ ಮೂರ್ನಾಡು ಸ್ಥಾನೀಯ ಸಮಿತಿ ಖಂಡಿಸಿದೆ. ತಪ್ಪಿತಸ್ಥನನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧ್ಯಕ್ಷ ಅರುಣ್ ಅಪ್ಪಚ್ಚು ಹೇಳಿಕೆ ನೀಡಿದ್ದಾರೆ.

ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಯು ಕೂಡ ಘಟನೆಯನ್ನು ಖಂಡಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಸಂಸ್ಥೆಯ ಅಧ್ಯಕ್ಷ ಮಾಳೇಟಿರ ನವೀನ್ ಕಾರ್ಯಪ್ಪ ಒತ್ತಾಯಿಸಿದ್ದಾರೆ.