ನಾಪೋಕ್ಲು, ಫೆ. 23: ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಹಾಗೂ ಅಟಲ್ ಪೆನ್ಷನ್ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.

ಕೃಷಿ ವಿಸ್ತರಣಾ ಅಧಿಕಾರಿ ಸುನೀಲ ಎಂ.ಜಿ. ಯೋಜನೆಗಳ ಮಾಹಿತಿ ನೀಡಿದರು. ಅನಿಶ ಮನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮ್ಯಾನೆಜರ್ ಸಫ್ರೀನಾ ಕೆ.ಪಿ. ಸಹಾಯಕ ಜನರಲ್ ಮ್ಯಾನೆಜರ್ ಅರುಣಾ ವಿ.ಜೆ. ಪಾಲ್ಗೊಂಡಿದ್ದರು.