ವೀರಾಜಪೇಟೆ, ಫೆ.20: ವೀರಾಜಪೇಟೆ ರಕ್ಷಣಾ ವೇದಿಕೆಯ ಟಿ.ಪಿ.ಅನಿಲ್ ಕುಮಾರ್ ಎಂಬುವರು ಪಟ್ಟಣ ಪಂಚಾಯಿತಿಯ ಏಳನೇ ವಾರ್ಡ್ನ ಸದಸ್ಯೆ ಎಂ.ಕೆ. ದೇಚಮ್ಮ ಅವರ ವಿರುದ್ದ ವಾರ್ಡ್ನ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಏಳನೇ ವಾರ್ಡ್ನ ಸಾರ್ವಜನಿಕರು ನೀಡಿದ ದೂರಿನ ಮೇರೆ ಅವರ ಪರವಾಗಿ ಅವರನ್ನು ವಿಚಾರಿಸಿದಾಗ ಉತ್ತಮ ಪ್ರತಿಕ್ರಿಯೆ ನೀಡಿಲ್ಲ. ಅವರನ್ನು ನಗರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂದು ನಗರ ಪೊಲೀಸರಿಗೆ ವಾರ್ಡ್ನ ಸಾರ್ವಜನಿಕರು ಸಹಿ ಮಾಡಿದ ದೂರನ್ನು ರಕ್ಷಣಾ ವೇದಿಕೆಯ ಲೆಟರ್ಹೆಡ್ನಲ್ಲಿ ನೀಡಿದ್ದರು.
ವಾರ್ಡ್ನ ಸಾರ್ವಜನಿಕರಿಂದ ಪ್ರತಿ ದೂರು
ಈ ಸಂಬಂಧದಲ್ಲಿ ಶಾಸಕರು ಏಳನೇ ವಾರ್ಡ್ನ ಸಾರ್ವಜನಿಕರಿಗೆ ವಾರ್ಡ್ನ ಎಲ್ಲ ಸಮಸ್ಯೆಗಳು ಹಾಗೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ತಡೆಗೋಡೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ತಡೆಗೋಡೆ ಜಖಂಗೊಂಡ ಜಾಗವನ್ನು ಪಟ್ಟಣ ಪಂಚಾಯಿತಿ ಸದಸ್ಯೆ ದೇಚಮ್ಮ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಶಾಸಕರು ಖುದ್ದು ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಪರಿಹಾರವನ್ನು ನೀಡಿದಲ್ಲದೆ ತಡೆಗೋಡೆಯನ್ನು ಸಧ್ಯದಲ್ಲಿಯೇ ನಿರ್ಮಿಸುವುದಾಗಿ ಭರವಸೆಯನ್ನು ನೀಡಿರುವುದನ್ನು ಸಾಕ್ಷ್ಯಾಧಾರ ಸಮೇತ ಪೊಲೀಸರಿಗೆ ತಿಳಿಸಿದ್ದು ಏಳನೇ ವಾರ್ಡ್ನ ನಿವಾಸಿಗಳಾದ ನಾವುಗಳು ಯಾವುದೇ ರೀತಿಯಲ್ಲಿ ಅನಿಲ್ ಕುಮಾರ್ಗೆ ದೂರು ನೀಡಿಲ್ಲ. ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಮರಿಸ್ವಾಮಿಗೆ ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯೆ ದೇಚಮ್ಮ ಅವರ ವಿರುದ್ಧ ಅನಿಲ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ ಸಂಬಂಧದಲ್ಲಿ ದೇಚಮ್ಮ ಸೇರಿದಂತೆ 9ಮಂದಿ ಸದಸ್ಯರುಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದ್ದರು.
ಸಬ್ ಇನ್ಸ್ಪೆಕ್ಟರ್ ಪ್ರತಿಕ್ರಿಯೆ