ಕೂಡಿಗೆ, ಜ. 31: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಿಂಡು ರೈತರ ಬೆಳೆಗಳನ್ನು ತುಳಿದು ತಿಂದು ಬಾರಿ ನಷ್ಟ ಪಡಿಸಿವೆ. ಈ ಭಾಗದಲ್ಲಿ ಒಂದಲ್ಲಾ ಒಂದು ಕಡೆಯಿಂದ ಹಾಗೂ ಸಮೀಪದ ಬೆಂಡೆಬೆಟ್ಟದ ಕಡೆಯಿಂದಲೂ ಹುದುಗೂರು ವ್ಯಾಪ್ತಿಯ ಕಾಳಿದೇವನಹೊಸೂರು ಯಡವನಾಡು ಮದಲಾಪುರ ಸೀಗೆಹೊಸೂರು ಭಾಗದಲ್ಲಿ ರೈತರು ಬೆಳೆದ ಕೋಸು , ಸಿಹಿಗೆಣಸು, ಬಾಳೆ ಕೇನೆ ಬೆಳೆಗಳನ್ನು ನಷ್ಟಪಡಿಸಿವೆ. ಸ್ಥಳಕ್ಕೆ ಹುದುಗೂರು ವ್ಯಾಪ್ತಿಯ ಉಪವಲಯ ಅರಣ್ಯ ಅಧಿಕಾರಿ ಸತೀಶ್, ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.