ಗೋಣಿಕೊಪ್ಪ ವರದಿ, ಜ. 31: ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಬೆಂಗಳೂರು ವಿ.ವಿ. ಕನ್ಫೆಕ್ಷನ್ ಹಾಲ್‍ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಡಗಿನ ಕರಾಟೆಪಟುಗಳು 9 ಪದಕಗಳಿಸಿ ಸಾಧನೆ ಮಾಡಿದ್ದಾರೆ.

1 ಚಿನ್ನ, 1 ಬೆಳ್ಳಿ, 7 ಕಂಚಿನ ಪದÀಕ ಗೆದ್ದಿದ್ದಾರೆ. ತನ್ಮಯ್ ಮೊಣ್ಣಪ್ಪಗೆ ಚಿನ್ನ, ಜೆಶ್ ಕಾವೇರಿಯಪ್ಪಗೆ ಬೆಳ್ಳಿ, ಉಳಿದಂತೆ ಕೆ.ಎಸ್. ಪೊನ್ನಣ್ಣ, ಸ್ಮರಣ್ ನಾಣಯ್ಯ, ವಿ.ಎ. ಜ್ಞಾನೇಶ್, ರೆಕಿ ಚಿಣ್ಣಪ್ಪ, ರೆರಿನ್ ದೇವಯ್ಯ, ನಕ್ಷಾ ಬೋಜಮ್ಮ, ಸಾನ್ವಿ ಮುತ್ತಕ್ಕ ಕಂಚಿನ ಪದಕ ಗೆದ್ದಿದ್ದಾರೆ.

ಇವರು ಅರುಣ್ ಮಾಚಯ್ಯ ನೇತೃತ್ವದ ಜೆನ್ ಶಿಟೊರಿಯೊ ಕರಾಟೆ ಶಾಲೆಯ ಕ್ರೀಡಾಪಟುಗಳು.