ನಾಪೆÇೀಕ್ಲು, ಜ. 31: ಕೂಡಿಗೆ ಡಯಟ್ ಸಂಸ್ಥೆಯವರು ಇನ್ಸ್‍ಪಯರ್ ಅರ್ವಾರ್ಡ್‍ಗಾಗಿ ಬಸವನಹಳ್ಳಿಯ ಮೊರಾರ್ಜಿ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮಾದರಿ ತಯಾರಿಕೆ ಮತ್ತು ವಸ್ತು ಪ್ರದರ್ಶನ ವಿಷಯದಲ್ಲಿ ಶ್ರೀ ರಾಮಟ್ರಸ್ಟ್ ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿ ಯಶಾಂತ್ ಬಿ.ಎಸ್. ಜಿಲ್ಲಾಮಟ್ಟದ ವಿಜ್ಞಾನ ತಯಾರಿಕೆ ಮಾದರಿ ಸ್ವರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಸಂದರ್ಭ ಶ್ರೀ ರಾಮ ಟ್ರಸ್ಟ್ ಶಾಲೆಯ ಪ್ರಾಂಶುಪಾಲೆ ಕಲ್ಯಾಟಂಡ ಶಾರದ, ಶಿಕ್ಷಕಿಯರಾದ ತನುಜ, ಸರಿತಾ ಇದ್ದರು.