*ಗೋಣಿಕೊಪ್ಪ, ಜ. 23: ರೂ.91 ಲಕ್ಷ ಅನುದಾನದಲ್ಲಿ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಹರು ನಗರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ವೀರಾಜಪೇಟೆ ತಾಲೂಕು ಬಿ.ಜೆ.ಪಿ ಅಧ್ಯಕ್ಷ ನೆಲ್ಲಿರ ಚಲನ್‍ಕುಮಾರ್, ನಿಕಟಪೂರ್ವ ಅಧ್ಯಕ್ಷ ಅರುಣ್ ಭೀಮಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಮ್ಮತ್ತಿರಾ ಸುರೇಶ್, ದಶಮಿ, ಜಯಲಕ್ಷ್ಮಿ, ಹರೀಶ್, ಲಕ್ಷ್ಮಣ, ಗುತ್ತಿಗೆದಾರ ತನು, ಸಾಮಾಜಿಕ ಜಾಲತಾಣ ನಿರ್ವಾಹಕ ಮಹೇಶ್ ಮಂದಣ,್ಣ ಕಾರ್ಯಕರ್ತರು ಹಾಜರಿದ್ದರು.