ಮಡಿಕೇರಿ, ಡಿ.28: ಸೋಮವಾರಪೇಟೆ ತಾಲೂಕು ಅಭ್ಯತ್ಮಂಗಲ ಗ್ರಾಮದ ಸರ್ವೆ ನಂ.87/2ರ ಜಾಗದಲ್ಲಿ ಕಾವೇರಿ ನದಿಯ ಬದಿಯಲ್ಲಿರುವ ಹಲವಾರು ಕಡೆ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ತಾ.30 ರಂದು ಬೆಳಗ್ಗೆ 11 ಗಂಟೆಗೆ ನಗರದ ಅರಣ್ಯ ಭವನ ಕಚೇರಿಯ 2 ನೇ ಮಹಡಿ ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆಸಕ್ತ ಸಾರ್ವಜನಿಕರು ಪಾಲ್ಗೊಂಡು ಮರ ತೆರವಿನ ಕಾಮಗಾರಿಯನ್ನು ಮುಂದುವರೆಸುವ ಬಗ್ಗೆ ಅಭಿಪ್ರಾಯ ನೀಡಬಹುದು ಅಥವಾ ಲಿಖಿತ ರೂಪದಲ್ಲಿಯೂ ಸೂಕ್ತ ಅಭಿಪ್ರಾಯವನ್ನು ಒಂದು ವಾರದೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ ಕಚೇರಿಗೆ ನೀಡಬಹುದು. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.