*ಸಿದ್ದಾಪುರ, ಡಿ. 20 : ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಗೆ ತಾ.22 ರಂದು ಚುನಾವಣೆ ನಡೆಯಲಿದ್ದು ಕೊಡಗಿನ ನಿರ್ದೇಶಕರ ಸ್ಥಾನಕ್ಕೆ ವೀರಾಜಪೇಟೆಯ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಬಿ.ಎಸ್. ಶಾಂತಪ್ಪ ಹಾಗೂ ಕುಶಾಲನಗರ ಗಂಧದಕೋಟೆ ನಿವಾಸಿ ಪ್ರಭಾಕರ ಸ್ಪರ್ಧಾ ಕಣದಲ್ಲಿದ್ದಾರೆ. ಕೊಡಗಿನ ಮಹಿಳಾ ಮೀಸಲು ಕ್ಷೇತ್ರದಿಂದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯಲ್ಲಿ 3 ಬಾರಿ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದ ಕಮಲಮ್ಮ ಹಾಗೂ ಕುಶಾಲನಗರದ ಸುಮಲತಾ ಸ್ಪರ್ಧಾಕಣದಲ್ಲಿದ್ದಾರೆ.

ಈ ಚುನಾವಣೆಯು ಹಾರಂಗಿ ನೀರಾವರಿ ಇಲಾಖೆಯ ಸಮೀಪ ಇರುವ ಗುತ್ತಿಗೆದಾರರ ಭವನದಲ್ಲಿ ತಾ. 22 ರಂದು ಬೆಳಿಗ್ಗೆ 9 ರಿಂದ 5 ಗಂಟೆಯವರೆಗೆ ನಡೆಯಲಿದೆ.