ಒಡೆಯನಪುರ, ಡಿ. 19: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ಜಮಾಬಂಧಿ ಸಭೆಯನ್ನು ಕಳೆದ ಎರಡು ವರ್ಷಗಳಿಂದ ನಡೆಸಿಲ್ಲ. ಗ್ರಾ.ಪಂ.ವ್ಯಾಪ್ತಿಯ ಜನರು ಜಮಾಬಂಧಿ ಸಭೆಯನ್ನು ನಡೆಸುವಂತೆ ಆಗ್ರಹಿಸುತ್ತಿದ್ದರೂ ಗ್ರಾ.ಪಂ.ನಿಂದ ಸಬೂಬು ಹೇಳಿಕೊಂಡು ಸಭೆ ನಡೆಸಿರಲಿಲ್ಲ. ಗುರುವಾರ ಬ್ಯಾಡಗೊಟ್ಟ ಗ್ರಾ.ಪಂ.ಅಧ್ಯಕ್ಷೆ ನಿರ್ಮಲ ಸುಂದರ್ ಅಧ್ಯಕ್ಷತೆಯಲ್ಲಿ ಜಮಾಬಂದಿ ಸಭೆಯನ್ನು ಕರೆಯಲಾಗಿತ್ತು. ಸಭೆಗೆ ಗ್ರಾ.ಪಂ. ಅಧ್ಯಕ್ಷೆ, ಕೆಲವೇ ಸದಸ್ಯರು, ಪಿಡಿಒ ಹೊರತುಪಡಿಸಿದಂತೆ ಉಳಿದ ಸದಸ್ಯರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಹಾಜರಾಗಿರಲಿಲ್ಲ; ಈ ಹಿನ್ನೆಲೆ ಜಮಾಬಂಧಿ ಸಭೆಯನ್ನು ಮುಂದೂಡಲಾಯಿತು.