ವೀರಾಜಪೇಟೆ, ಡಿ. 3 : ವೀರಾಜಪೇಟೆಯ ನೆಹರು ನಗರದ ನವಜ್ಯೋತಿ ಯುವಕ ಸಂಘದ 30ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 4ನೇ ವರ್ಷದ ಪುರುಷರ ಮುಕ್ತ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟವನ್ನು ತಾಲೂಕು ಮೈದಾನದಲ್ಲಿ ತಾ 14 ಮತ್ತು 15ರಂದು ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ರವಿ ಮಾಹಿತಿ ನೀಡಿದ್ದರೆ.
ಯುವಕ ಸಂಘವು ಸಾಮಾಜಿಕ ಶೈಕ್ಷಣಿಕ ಮತ್ತು ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡಿ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಗ್ರಾಮೀಣ ಕ್ರೀಡಾಪಟು ಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ಈ ಪಂದ್ಯಾಟವು ಸಹಕಾರಿಯಾಗಲಿದೆ ಎಂದು ರವಿ ಹೇಳಿದ್ದಾರೆ.
ಪಂದ್ಯಾಟಕ್ಕೆ ಹೆಸರು ನೋಂದಾ ಯಿಸಿಕೊಳ್ಳಲು ತಾ. 9.12.2019 ಅಂತಿಮ ದಿನಾಂಕ ವಾಗಿದೆ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಮತ್ತು ಉತ್ತಮ ಆಟಗಾರರಿಗೆ ವೈಯುಕ್ತಿಕ ಟ್ರೋಫಿ ನೀಡಿ ಗೌರವಿ ಸಲಾಗುವದು ಎಂದು ತಿಳಿಸಿದ್ದಾರೆ.