ಶ್ರೀಮಂಗಲ, ನ. 12: ಮಡಿಕೇರಿ ವನ್ಯಜೀವಿ ವಿಭಾಗದ ಶ್ರೀಮಂಗಲ, ನಾಗರಹೊಳೆ ಮತ್ತು ಪೊನ್ನಂಪೇಟೆ ವಲಯದ ವ್ಯಾಪ್ತಿಗೆ ಬರುವಂತಹ ಗ್ರಾಮಗಳಾದ ಕಾಯಿಮನಿ, ಮಂಚಳ್ಳಿ, ಕುಟ್ಟ, ತೈಲಾ, ಪನ್ಯಾ, ಕೇಂಬುಕೊಲ್ಲಿ ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರ ತೋಟ, ಗದ್ದೆಗಳಿಗೆ ಕಾಡಾನೆ ಹಿಂಡುಗಳು ನುಗ್ಗಿ ಕೃಷಿ ನಾಶಪಡಿಸುತ್ತಿದ್ದು, ತಾ.13 ರಂದು (ಇಂದು) ಮತ್ತು 14 ರಂದು (ನಾಳೆ) ಬೆಳಿಗ್ಗೆ 8 ರಿಂದ 6 ಗಂಟೆವರೆಗೆ ಈ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ಈ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರು, ಕಾರ್ಮಿಕರು ತೋಟಗಳಲ್ಲಿ ಕೆಲಸ ಕಾರ್ಯ ಸ್ಥಗಿತಗೊಳಿಸಿ, ಸಹಕಾರ ನೀಡಬೇಕಾಗಿ ಶ್ರೀಮಂಗಲ ವಲಯ ಅರಣ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.