ಸಂಪಾಜೆ, ಅ. 13: ಸಂಪಾಜೆ ಬಿ.ಜೆ.ಪಿ. ಸ್ಥಾನೀಯ ಸಮಿತಿಯಿಂದ 3 ವಾರ್ಡ್‍ಗಳ ಬೂತ್ ಸಮಿತಿ ರಚಿಸುವ ಸಲುವಾಗಿ ಸ್ಥಾನೀಯ ಸಮಿತಿ ಸಭೆಯನ್ನು ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು. ಪಕ್ಷದ ಪ್ರಮುಖರು ಮತ್ತು ಸಂಪಾಜೆಯ ಗ್ರಾಮಸ್ಥರು ಹಾಗೂ ಸಮಸ್ತ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಸಭೆಯಲ್ಲಿ 23ನೇ ವಾರ್ಡ್‍ನ ಬೂತ್ ಸಮಿತಿ ಅಧ್ಯಕ್ಷರಾಗಿ ನಾರಾಯಣ ಕುಕ್ಕೆಟ್ಟಿ, ಕಾರ್ಯದರ್ಶಿಯಾಗಿ ರವಿಪ್ರಕಾಶ್ ಕುದ್ಕುಳಿ, 24ನೆ ವಾರ್ಡ್‍ನ ಬೂತ್ ಸಮಿತಿ ಅಧ್ಯಕ್ಷರಾಗಿ ಅಜಿತ್ ದೇವರಗುಂಡ, ಕಾರ್ಯದರ್ಶಿಯಾಗಿ ಉದಯ್ ಕುಮಾರ್ ಅರೆಕಲ್ಲು, 25ನೇ ವಾರ್ಡ್‍ನ ಬೂತ್ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಪರ್ಮಲೆ, ಕಾರ್ಯದರ್ಶಿಯಾಗಿ ನವೀನ್ ಕೊಯನಾಡು ಇವರನ್ನು ಆಯ್ಕೆ ಮಾಡಲಾಯಿತು.

ವರದಿ: ಶಭರೀಶ್ ಕುದ್ಕುಳಿ