ಪೆರಾಜೆ, ಸೆ. 30: ಶ್ರೀ ವಯನಾಟ್ ಕುಲವನ್ ದೇವಸ್ಥಾನ ಪೆರಾಜೆ, ಸೆ. 30: ಶ್ರೀ ವಯನಾಟ್ ಕುಲವನ್ ದೇವಸ್ಥಾನ ನಡೆಯಲಿರುವ ದೈವಕಟ್ಟು ಮಹೋತ್ಸವದ ನಿಧಿ ಸಂಗ್ರಹದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಕುಂಬಳಚೇರಿ ವಿಶ್ವನಾಥ್ ಅವರು ನಡೆಸಿಕೊಟ್ಟರು. ಇದರ ಪ್ರಯುಕ್ತ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರಾರ್ಥನೆ, ವಯನಾಟ್ ಕ್ಷೇತ್ರದಲ್ಲಿ ಗಣಪತಿ ಹವನ, ರಾತ್ರಿ ಕೈವಿದ್ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಯನಾಟ್ ಕುಲವನ್ ಆಡಳಿತ ಮಂಡಳಿಯ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಕಾರ್ಯದರ್ಶಿ ವಿಶ್ವನಾಥ್ ಮಜಿಕೋಡಿ, ಗೌರವ ಅಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಉತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ, ಕಾರ್ಯದರ್ಶಿ ಉದಯ ಕುಂಬಳಚೇರಿ, ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ತಕ್ಕ ಮುಖ್ಯಸ್ಥ ಗಣಪತಿ ಕುಂಬಳಚೇರಿ, ದೇವತಕ್ಕ ರಾಜಗೋಪಾಲ ರಾಮಕಜೆ, ಶಾಸ್ತಾವು ದೇವಸ್ಥಾನದ ಅರ್ಚಕ ಕೆ. ವೆಂಕಟ್ರಮಣ ಪಾಂಙಣ್ಣಾಯ, ವಯನಾಟ್ ದೈವಸ್ಥಾನದ ಅರ್ಚಕ ಕುಂಞÂಕಣ್ಣನ್ ಸೇರಿದಂತೆ ಊರಿನ ಪ್ರಮುಖರು, ಗ್ರಾಮಸ್ಥರು ಸೇರಿದ್ದರು.