ಮಡಿಕೇರಿ, ಸೆ. 13 : ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭ ತಾ.12ರಂದು ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅವರನ್ನು ಸನ್ಮಾನಿಸಲಾಯಿತು.ಕೊಡಗು, ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಆಯ್ದ 6 ಮಂದಿ ಗೌರವಕ್ಕೆ ಭಾಜನರಾದರು.ಪ್ರತಿ ವರ್ಷ 170 ವಿವಿಧ ತಳಿಯ ಭತ್ತ ಬೆಳೆಯುವ ಬೆಳ್ತಂಗಡಿಯ ದೇವರಾಯ, ರಾಷ್ಟ್ರೀಯ ಪ್ರಶಸ್ತಿ ವಿಜೇತ (ಮೊದಲ ಪುಟದಿಂದ) ಸಿನಿಮಾ ನಿರ್ದೇಶಕ ಮಂಗಳೂರಿನ ಅಭಯಸಿಂಹ, ಗೋವಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಗೋಪಾಲ್ ಮುಗೇರಾಯ, ಪೂನಾದ ಸಿಂಬಾಯಾಸೀಸ್ ಸಂಸ್ಥೆಯ ನಿರ್ದೇಶಕಿ ಶಶಿಕಲಾ ಗುರುಪುರ್, ತುಳು ಜಾನಪದ ಕ್ಷೇತ್ರದ ಸಾಧಕ ಗಣೇಶ್ ಅಮೀನ್ ಸಂಕಮಾರ್ ಇವರುಗಳನ್ನೂ ಇದೇ ಸಂದರ್ಭದಲ್ಲಿ ಗಣ್ಯರು ಗೌರವಿಸಿದರು.

ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಿಪÀಡಿತ್ತಾಯ, ಒಡಿಸ್ಸಾ ಕೇಂದ್ರಿಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ. ಪಿ.ವಿ. ಕೃಷ್ಣಭಟ್, ಕೇಂದ್ರಿಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ, ವಿಶ್ರಾಂತ ಕುಲಪತಿ, ಪ್ರೊ.ಬಿ. ಹನುಮಯ್ಯ, ಕುಲಸಚಿವ ಪ್ರೊ. ಎ.ಎಂ. ಖಾನ್, ಸಂಸ್ಥೆಯ ಹಣಕಾಸು ಅಧಿಕಾರಿ ಪ್ರೊ. ಶ್ರೀಪತಿ ಕಲ್ಲೂರಾಯ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.